
ಧಾರವಾಡ
ಭಾರತೀಯ ಪದ್ಧತಿಯಲ್ಲಿ ಸಂವತ್ಸರಗಳಿಗೆ ಮಹತ್ವ ಇದೆ. ಈಗ ಕ್ರೋಧಿ ನಾಮ ಸಂವತ್ಸರ ನಡೆಯುತ್ತಿದ್ದು, ಈ ಸಂವತ್ಸರ ಒಳಿತಿಗಿಂತ ಕೆಡುಕು ಹೆಚ್ಚು ಮಾಡುತ್ತದೆ ಎಂದು ತಿಳಿಸಿದ್ದಾರೆ ಎಂದು ಧಾರವಾಡದಲ್ಲಿ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭೂಮಿ, ಅಗ್ನಿ, ಆಕಾಶ, ವಾಯು, ಜಲ ಐದರಿಂದಲೂ ತೊಂದರೆ ಇದೆ. ಆಕಾಶ ತತ್ವ ಆಗಲಿದ್ದು, ಈ ಕುರಿತು ಶ್ರಾವಣದಲ್ಲಿ ವಿವರವಾಗಿ ಹೇಳುವೆ. ಸುರಿದಲ್ಲಿಯೇ ಮಳೆ ಸುರಿಯುತ್ತದೆ. ಜಗತ್ತಿನಲ್ಲಿ ಭೂ ಕುಸಿತ, ಜಲಪ್ರಳಯ ಲಕ್ಷಣ ಇದೆ. ಗಾಳಿಯಿಂದಲೂ ತೊಂದರೆ ಆಗಲಿದೆ ಎಂದು ಆತಂಕಕಾರಿ ಭವಿಷ್ಯ ನುಡಿದರು. ಇನ್ನೂ ರಾಷ್ಟ್ರ ರಾಜಕಾರಣದಲ್ಲಿ ಬಗ್ಗೆ ಮಾತಾನಾಡಿ, ಅಧಿಕಾರಕ್ಕಾಗಿ ಅತಂತ್ರೆಲ್ಲರು ಕೂಡಿದ್ದಾರೆ. ಇನ್ನೂ ಅಂಗಡಿ ಓಪನ್ ಆಗಿಲ್ಲ.
ದೇಶದ ರಾಜಕೀಯ ಸ್ಥಿತಿಗತಿ ಬಗ್ಗೆ ಈಗಲೇ ಅಶುಭ ನುಡಿಯಬಾರದು, ಶುಭವೋ ಅಶುಭವೋ ಅಂತಾ ಶ್ರಾವಣದಲ್ಲಿ ಹೇಳುತ್ತೇನೆ. ವ್ಯಾಪಾರ ಆರಂಭವಾಗುವ ಮುಂಚೆ ಶುಭ ಅಶುಭ ನುಡಿಯುವುದು ಸರಿಯಲ್ಲ, ವ್ಯಾಪಾರ ಶುರುವಾಗ್ಲಿ, ಆ ಮೇಲೆ ಶ್ರಾವಣದಲ್ಲಿ ರಾಷ್ಟ್ರ ರಾಜಕಾರಣದ ಭವಿಷ ಹೇಳುವೆ. ಮಹಾಭಾರತದಲ್ಲಿ ಅಭಿಮನ್ಯುವಿನ ಬಿಲ್ಲಿನ ದಾರ ಕರ್ಣನಿಂದ ಕಟ್ ಮಾಡಿಸಿದರು. ಈಗ ಅಭಿಮನ್ಯುವಿನ ಹೆಂಡತಿ ಸಂಸತ್ ನಲ್ಲಿ ಪ್ರವೇಶ ಮಾಡ್ತಾಳೆ. ಆದರೆ ದುರ್ಯೋಧನನ ತೊಡೆ ಒಡೆಸಿದ ಕೃಷ್ಣ ಈಗ ಇಲ್ಲ, ಹೀಗಾಗಿ ದುರ್ಯೋಧನ ಗೆಲ್ಲುತ್ತಾನೆ ಎಂದು ತರ್ಕದಿಂದ ಭವಿಷ್ಯ ನುಡಿದಿದ್ದಾರೆ.
ಜಗತ್ತಿನಲ್ಲಿ ಎರಡ್ಮೂರು ಪ್ರಧಾನಿಗಳ ಸಾವು ಆಗಲಿದೆ ಎಂದೂ ಹಿಂದೆಯೇ ಹೇಳಿದ್ದೇನೆ. ದೊಡ್ಡ ದೊಡ್ಡವರಿಗೆ ನೋವು ತಾಪ ದುಃಖ ಆಗಲಿದೆ. ಕರೆಯದೆ ಬರುವವನು ಕೋಪ, ಬರೆಯದೇ ಓದುವವನು ಕಣ್ಣು, ಬರಗಾಲಿನಲ್ಲಿ ನಡೆಯುವವನ ಮನಸ್ಸು, ಈ ಮೂರು ನಿಯಂತ್ರಣದಲ್ಲಿಡಬೇಕು ಆದರೇ ಜನರು ದುಡ್ಡು, ಅಧಿಕಾರ ಮುಖ್ಯ ಅಂತಾ ಹೊರಟಿದ್ದಾರೆ. ಇದು ಅಧಃಪತನಕ್ಕೆ ಕಾರಣವಾಗಲಿದೆ ಎಂದು ತಿಳಿಸಿದರು