April 18, 2025

ಹುಬ್ಬಳ್ಳಿ ಬ್ರೇಕಿಂಗ್

ಹುಬ್ಬಳ್ಳಿಯ ವೀರಾಪುರ ಓಣಿಯ ಅಂಜಲಿ ಎಂಬ ಯುವತಿ ಕೊಲೆ ಪ್ರಕರಣ ಸಂಬಂಧಿಸಿದಂತೆ ಅಂಜಲಿಯ ಅಜ್ಜಿ  ಕಳೆದ ತಿಂಗಳ ಏಪ್ರಿಲ್ 22 ರಂದು ನೆಹಾ ರೀತಿ ನಿನಗೂ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ  ವಿಶ್ವ ಅಲಿಯಾಸ್ ಗಿರಿ ವಿರುದ್ಧ  ಬೆಂಡಿಗೇರಿ ಪೊಲೀಸ್ ಠಾಣೆಗೆ ದೂರು ಕೊಟ್ಟರು ಕೂಡಾ ಮೂಢ ನಂಬಿಕೆಗಳನ್ನು ನಂಬ ಬೇಡಿ ಏನು ಆಗುವುದಿಲ್ಲ ಹೋಗಿ ಎಂದು ಮರಳಿ ಮನೆಗೆ ಕಳುಹಿಸಿದ್ದ ಪೊಲೀಸರು.

ಅದಾಗಲೇ ಆರೋಪಿಯನ್ನು ಕರೆದು ವಿಚಾರಿಸಿ ಸೂಕ್ತ ಕ್ರಮ ಕೈಗೊಂಡಿದ್ದರೆ ಅಂಜಲಿಯ ಕೊಲೆ ಆಗುತ್ತಿರಲಿಲ್ಲ ಎಂಬ ವಿಚಾರ ಓಣಿಯ ಹಿರಿಯರದ್ದ ಆಗಿದೆ. ಇದೆಲ್ಲ ಆಗುವ ನೇರ ಕಾರಣ ಪೊಲೀಸ್ ಇಲಾಖೆಗೆ ಕಳಂಕ ತರುವಂತಹ ಸಂಗತಿ, ಇಂತಹ ಕರ್ತವ್ಯ ಲೋಪಗಳ ಬಗ್ಗೆ ಕಮಿಷನರ್ ರೇಣುಕಾ ಸುಕುಮಾರ್ ಅವರು ಏನು ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!