ದಿನಾಂಕ: ಡಿಸೆಂಬರ್ ೦೨, ೨೦೨೫
ಸ್ಥಳ: ಧಾರವಾಡ
ಸುಪ್ರೀಂ ಕೋರ್ಟ್ ಆದೇಶದ ನೇರ ಪರಿಣಾಮವಾಗಿ ಹೊರಗುತ್ತಿಗೆ ನೌಕರರ ಭವಿಷ್ಯಕ್ಕೆ ಸ್ಪಷ್ಟತೆ ಬರಲು ಪ್ರಾರಂಭವಾಗಿದೆ. ಕೋರ್ಟ್ ೨೦೨೮ ಮಾರ್ಚ್ ೩೧ರೊಳಗೆ ಹೊರಗುತ್ತಿಗೆಯನ್ನು ಕೊನೆಗೊಳಿಸಲು ಆದೇಶಿಸಿದ್ದು, ಇದರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಜಿಲ್ಲಾ ಕಾರ್ಮಿಕರ ಸೇವಾ ವಿವಿದೋದ್ದೇಶ ಸಹಕಾರ ಸಂಘ (ನಿಯಮಿತ) ಸ್ಥಾಪನೆಗೆ ಉಪಸಮಿತಿ ರಚಿಸಿದೆ.
ಈ ಹೊಸ ಸಂಘಟನಾತ್ಮಕ ಮಾದರಿಯ ಅಡಿಯಲ್ಲಿ, ಹೊರಗುತ್ತಿಗೆ ನೌಕರರನ್ನು ನೇರವಾಗಿ ಸಹಕಾರ ಸಂಘದ ಸದಸ್ಯರನ್ನಾಗಿ ಮಾಡಿ, ಅವರ ಸೇವೆಗಳನ್ನು ಮುಂದುವರೆಸಲು ಯೋಜಿಸಲಾಗಿದೆ. ಈ ದಿಸೆಯಲ್ಲಿ ಕರ್ನಾಟಕ ಇ.ಎಸ್.ಐ. ಅಸ್ಪತ್ರೆ ಹೊರಗುತ್ತಿಗೆ ನೌಕರರ ಸಂಘವು (ಕರ್ನಾಟಕ ESI Hospital Outsourced Employees Association) ಮೊದಲ ಆಕ್ರಮಣ ಕ್ರಮ ತೆಗೆದುಕೊಂಡಿದೆ.
ಇಂದು (೦೨-೧೨-೨೦೨೫) ಧಾರವಾಡದ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಸಂಘದ ಪ್ರತಿನಿಧಿಗಳು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ, ಧಾರವಾಡ ಜಿಲ್ಲೆಯ ಇ.ಎಸ್.ಐ. ಅಸ್ಪತ್ರೆ ಮತ್ತು ಚಿಕಿತ್ಸಾಲಯಗಳಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ನೌಕರರನ್ನು ಪರಿಗಣಿಸಿ, ಅವರ ಸೇವೆಯನ್ನು ಮುಂದುವರೆಸಲು ಮತ್ತು ರಚನೆಯಾಗಲಿರುವ ‘ಜಿಲ್ಲಾ ಕಾರ್ಮಿಕರ ಸೇವಾ ವಿವಿದೋದ್ದೇಶ ಸಹಕಾರ ಸಂಘ’ದಲ್ಲಿ ನೇರ ಸದಸ್ಯತ್ವ ನೀಡಲು ನಾಮನಿರ್ದೇಶನ ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ಈ ಮನವಿಗೆ ಜಿಲ್ಲಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಂಘದ ನೇತೃತ್ವ ತಿಳಿಸಿದೆ.
ಈ ಐತಿಹಾಸಿಕ ಮನವಿ ಸಲ್ಲಿಕೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಶ್ರೀ ನವೀನಕುಮಾರ ಎನ್. ಕುಂದಗೋಳ, ಉಪಾಧ್ಯಕ್ಷ ಶ್ರೀ ಶಿವಶಂಕರ ಕೆ. ಭಂಡಾರಿ, ಕಾರ್ಯದರ್ಶಿ ಶ್ರೀ ಶಿವರಾಜ ಹೂಗಾರ, ಸಂಘಟನಾ ಕಾರ್ಯದರ್ಶಿ ಶ್ರೀ ಆಸಿಫ್ ಮದಗಮಾಸೂರ, ಕಾರ್ಯಕಾರಿ ಸದಸ್ಯ ಶ್ರೀ ಮಂಜುನಾಥ ಮತ್ತಿಗಟ್ಟಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶ್ರೀ ಬಸವರಾಜ ಕುಂದರಗಿ ಅವರು ಉಪಸ್ಥಿತರಿದ್ದರು.
ಹಿನ್ನೆಲೆ:
ಸುಪ್ರೀಂ ಕೋರ್ಟ್ ಅನೇಕ ಸರ್ಕಾರಿ ಮತ್ತು ಅರೆಸರ್ಕಾರಿ ಸಂಸ್ಥೆಗಳಲ್ಲಿ ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದರೂ ಸಹ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೂರಾರು ನೌಕರರ ಭವಿಷ್ಯದ ಬಗೆಗಿನ ಅನಿಶ್ಚಿತತೆ ಕೊನೆಗೊಳ್ಳಲಿದೆ. ಕೋರ್ಟ್ ೨೦೨೮ ಮಾರ್ಚ್ ೩೧ರ ವೇಳೆಗೆ ಈ ಪದ್ಧತಿಯನ್ನು ಕೊನೆಗೊಳಿಸುವಂತೆ ಆದೇಶಿಸಿದೆ. ಇದರಿಂದ ಉದ್ಭವಿಸಬಹುದಾದ ಸೇವಾ ಅಡಚಣೆ ತಪ್ಪಿಸಲು ಮತ್ತು ನೌಕರರ ಜೀವನೋಪಾಯಕ್ಕೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರವು ಸಹಕಾರ ಸಂಘಗಳ ಮೂಲಕ ಪರ್ಯಾಯ ವ್ಯವಸ್ಥೆ ರೂಪಿಸಲು ಮುಂದಾಗಿದೆ.
ಮುಂದಿನ ನಿಲುವು:
ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಜಿಲ್ಲಾ ಆಡಳಿತ ಈ ಹೊಸ ಸಹಕಾರ ಸಂಘಟನಾ ಮಾದರಿಯನ್ನು ಯಶಸ್ವಿಯಾಗಿ ಅಳವಡಿಸಿಕೊಳ್ಳುವುದರ ಮೇಲೆ, ಸರ್ಕಾರಿ ಆರೋಗ್ಯ ಸೇವೆಗಳು ಸದಾಕಾಲ ನಿರ್ವಿಘ್ನವಾಗಿ ಮುಂದುವರೆಯುವುದು ಮತ್ತು ದೀರ್ಘಕಾಲ ಸೇವೆ ಸಲ್ಲಿಸಿದ ನೌಕರರಿಗೆ ನ್ಯಾಯ ಸಿಕ್ಕುವುದು ಸಾಧ್ಯ ಎಂದು ಸಂಘದ ನೇತೃತ್ವ ನಂಬಿದೆ.