ಹುಬ್ಬಳ್ಳಿ :ಹೆಸ್ಕಾಂನ ಮೃತ ನೌಕರರ ಅವಲಂಬಿತರಿಗೆ ಅನುಕಂಪದ ಆಧಾರದಡಿಯಲ್ಲಿ ನೇಮಕಾತಿ ಆದೇಶ ಪತ್ರಗಳನ್ನು ಹೆಸ್ಕಾಂ ಆಧ್ಯಕ್ಷರಾದ ಸೈಯದ್ ಅಜೀಮ್ಪೀರ್ ಎಸ್ ಖಾದ್ರಿ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ವೈಶಾಲಿ ಎಂ.ಎಲ್ ಅವರು ವಿತರಿಸಿದರು.
ಮಹಾದೇವ ಹೂಳೆಪ್ಪ ಪೂಜಾರಿ ಅವರು ಚಿಕ್ಕೋಡಿಯ ಯಡೂರು ಹೆಸ್ಕಾಂ ಕಚೇರಿಯಲ್ಲಿ ಮೆಕಾನಿಕ್ (ದರ್ಜೆ 2) ಆಗಿ ಕರ್ತವ್ಯ ನಿಭಾಯಿಸುತ್ತಿದ್ದರು. ಜ 01, 2025 ರಂದು ಕರ್ತವ್ಯದ ವೇಳೆ ನಿಧನರಾದರು.
ಈಗ ಅವರ ಪುತ್ರ ಅಜೀತ್ನಿಗೆ ಅನುಕಂಪದ ಆಧಾರದ ಮೇಲೆ ಕಿರಿಯ ಪವರ್ ಮ್ಯಾನ್ ಹುದ್ದೆ ನೀಡಲಾಗಿದೆ. ಹಾವೇರಿಯ ಜಿಲ್ಲೆಯ ಬ್ಯಾಡಗಿ ಹೆಸ್ಕಾಂ ಕಚೇರಿಯಲ್ಲಿ ಮೆಕಾನಿಕ್ ( ದರ್ಜೆ- 2) ಆಗಿದ್ದ ಶಿವಾನಂದ ಎಸ್ ಅವರು ಸೆ.05, 2024 ರಂದು ನಿಧನರಾಗಿದ್ದರು.
ಅವರ ಪುತ್ರಿ ದಿವ್ಯಾ ಎಸ್ ಗೆ ಕಿರಿಯ ಸಹಾಯಕಿ ಹುದ್ದೆ ನೀಡಲಾಗಿದೆ. ಬೆಳಗಾವಿ ಜಿಲ್ಲೆಯ ಘಟಪ್ರಭಾ ಹೆಸ್ಕಾಂ ಕಚೇರಿಯಲ್ಲಿ ಕಿರಿಯ ಸಹಾಯಕರಾಗಿದ್ದ ದಿ. ಬಸವರಾಜ ದುಂಡಪ್ಪ ಜೋನಿ ಅವರ ಪುತ್ರ ವಿನಾಯಕನಿಗೆ ಕಿರಿಯ ಸ್ಟೇಷನ್ ಪರಿಚಾರಕ ಹುದ್ದೆ ನೀಡಿ ನೇಮಕಾತಿ ಆದೇಶ ಪತ್ರವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಹೆಸ್ಕಾಂನ ಪ್ರಧಾನ ವ್ಯವಸ್ಥಾಪಕರು (ಆ ಮತ್ತು ಮಾ.ಸಂ.ಅ) ಮೊಹಮ್ಮದ ಖಿಜರ್, ಹೆಸ್ಕಾಂ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ವಿನಾಯಕ ಪಾಲನಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
