ಹುಬ್ಬಳ್ಳಿ: ನಗರ ನಿವಾಸಿಗಳಿಂದ ಪ್ರತಿಯೊಂದು ಹಂತದಲ್ಲಿ ಟ್ಯಾಕ್ಸ್ ವಸೂಲಿ ಮಾಡೋ ಪಾಲಿಕೆಯ ಅಧಿಕಾರಿಗಳಿಗೆ ಜನರ ಸಮಸ್ಯೆ ಮಾತ್ರ ಕಾಣದಾಗಿದ್ದು, ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹುಬ್ಬಳ್ಳಿ ವಾರ್ಡ್ ನಂಬರ 51ರ ಆನಂದ ನಗರದಲ್ಲಿ ಬೀದಿ ನಾಯಿಗಳ ಅಟ್ಟಹಾಸ ಮೇರೆಯುತ್ತಿದ್ದರು ಕ್ರಮ ಕೈಗೊಳ್ಳದೆ ಇರುವುದು ಕೈಗನ್ನಡಿಯಾಗಿದೆ.
ವಾರ್ಡ ನಂಬರ್ 51ರ ನ್ಯೂ ಆನಂದ ನಗರದಲ್ಲಿ ಬೀದಿ ನಾಯಿಗಳ ಅಟ್ಟಹಾಸದಿಂದಾಗಿ ಅನೇಕ ಚಿಕ್ಕಮಕ್ಕಳು ಹೊರ ಬರಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಅನೇಕ ಮಕ್ಕಳಿಗೆ ಇಲ್ಲಿನ ಬೀದಿ ನಾಯಿಗಳು ಕಚ್ಚಿದ ಉದಾಹರಣೆಗಳು ಸಾಕಷ್ಟಿದ್ದು, ಇದರ ಬಗ್ಗೆ ಸ್ಥಳೀಯರು ಪಾಲಿಕೆಯ ಸಹಾಯವಾಣಿಯ ಮೂಲಕ ದೂರು ಕೂಡಾ ನೀಡಿದ್ದಾರೆ. ಆದರೆ ಇಲ್ಲಿಯವರೆಗೂ ಪಾಲಿಕೆಯ ರೆಸ್ಪಾನ್ಸ್ ಮಾತ್ರ ಶೂನ್ಯವಾಗಿದೆ. ಇದರಿಂದಾಗಿ ದಿನ ಮುಂಜಾನೆಯಾದ್ದರೆ ಇಲ್ಲಿನ ನಿವಾಸಿಗಳು ಪಾಲಿಕೆ ಆಡಳಿತ ವ್ಯವಸ್ಥೆ ವಿರುದ್ಧ ಹಿಡಿ ಶಾಪ ಹಾಕುವಂತಾಗಿದೆ.
ನ್ಯೂ ಆನಂದ ನಗರದ ವೃದ್ಧರು ಸಹ ಮನೆಯಿಂದ ಆಚೆಗೆ ಬರಲು ನಾಯಿಗಳ ಬೆದರಿಸಲು ಕೋಲು ಹಿಡಿದುಕೊಂಡ ಬರಬೇಕಾಗಿದ್ದು, ಬೀದಿ ನಾಯಿಗಳಿಂದ ಬೇಸತ್ತು ಜನತೆ ಪಾಲಿಕೆಯ ಸಹಾಯವಾಣಿ – 2213888 ಗೆ ಕರೆ ಮಾಡಿ ದೂರು ದಾಖಲು ಮಾಡಿದ್ದಾರೆ. ದೂರು ದಾಖಲಿಸಿ ಸಂಖ್ಯೆಯನ್ನು 342188 ಕೂಡ ಪಡೆದಿದ್ದಾರೆ. ದೂರು ಕೊಟ್ಟು 45 ದಿನಗಳು ಕಳೆದಿದ್ದು, ಆದರೆ ಪಾಲಿಕೆ ಅಧಿಕಾರಿಗಳು ಜನರ ದೂರುಗಳನ್ನು ಆಲಿಸಿದೆ ಬಂತು ಹೊರತ್ತು ಕ್ರಮ ಮಾತ್ರ ಇನ್ನೂ ಶೂನ್ಯವಾಗಿದೆ.
ಟ್ಯಾಕ್ಸ ವಸೂಲಿಯಲ್ಲಿ ಆಸಕ್ತಿ ತೋರಿಸುವ ಪಾಲಿಕೆಯ ಅಧಿಕಾರಿಗಳು ಜನರ ಸಮಸ್ಯೆಯ ಪರಿಹಾರಕ್ಕೆ ಕ್ಯಾರೆ ಎನ್ನುತ್ತಿಲ್ಲ. ಅವರೇ ನೀಡಿದ ಸಹಾಯವಾಣಿಯ ಮೂಲಕ ದೂರು ನೀಡಿದರು ಕ್ರಮ ಇಲ್ವಂದ್ರೇ, ನಾವ್ಯಾಕ್ಕೆ ಇವರಿಗೆ ಟ್ಯಾಕ್ಸ್ ಕೊಡಬೇಕು ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. ಈಗಲಾದ್ರೂ ನಿದ್ದೆಯಲ್ಲಿರೋ ಪಾಲಿಕೆ ಎಚ್ಚೆತ್ತುಕೊಂಡು ಇಲ್ಲಿನ ಬೀದಿ ನಾಯಿಗಳ ಸಮಸ್ಯೆಗೆ ಪರಿಹಾರ ನೀಡುತ್ತಾ ಕಾದು ನೋಡಬೇಕಾಗಿದೆ.