April 19, 2025

ಪಬ್ಲಿಕ್ ರೈಡ್ ನ್ಯೂಸ್

ಹುಬ್ಬಳ್ಳಿ : ಪ್ರಕಾಶ್ ಎಂಬ ಯುವಕನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಹುಬ್ಬಳ್ಳಿಯ ಕೇಶವಪುರದ ನಾಗಶೆಟ್ಟಿಕೊಪ್ಪದಲ್ಲಿ  ನಡೆದಿದೆ.

ಕಿರಣ್ ಬಡಿಗೇರ ಮತ್ತು ಸಂಗಮೇಶ ಎಂಬ ಸ್ನೇಹಿತರು ಇಬ್ಬರು ಸೇರಿ ಮೊದಲು ಪ್ರಕಾಶ ಮೇಲೆ ಹಲ್ಲೆ  ಮಾಡಿದ್ದಾರೆ ತನ್ನ ಜೀವವನ್ನು ಉಳಿಸಿಕೊಳ್ಳಲು ತಪ್ಪಿಸಿಕೊಂಡು ಓಡಿ ಹೋದ ಪ್ರಕಾಶ್  ನಾಗಶೆಟ್ಟಿಕೊಪ್ಪದ ಹನುಮಂತ ದೇವಸ್ಥಾನ ಹಿಂದೆ ಕಾಲು ಜಾರಿ ಬಿದ್ದಿದಾನೆ ಅದೇ ಸ್ಥಳದಲ್ಲಿ  ಬೆನ್ನಟ್ಟಿ ಬಂದ ಕಿರಣ್ ಮತ್ತು ಸಂಗಮೇಶ ಇಬ್ಬರು ಸೇರಿ ಪ್ರಕಾಶನನ್ನು ಹತ್ಯೆ ಮಾಡಿದ್ದಾರೆ ಈ ಘಟನೆಯು ಕುಡಿದ ಮತ್ತಿನಲ್ಲಿ  ನಡೆದಿದೆ ಎಂದು ತಿಳಿದುಬಂದಿದೆ.

ಘಟನೆಯ ಕುರಿತು ಕೇಶವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.

ಪ್ರಕಾಶನ ಕೊಲೆಗೆ ಕಾರಣ ಏನು ಅಂತ ಪೊಲೀಸ್  ತನಿಖೆಯಿಂದ ಹೊರ ಬೀಳಬೇಕಿದೆ.

Leave a Reply

Your email address will not be published. Required fields are marked *

error: Content is protected !!