January 29, 2026

ಪಬ್ಲಿಕ್ ರೈಡ್ ನ್ಯೂಸ್ ರಾಮದುರ್ಗ

ಸ್ಪರ್ಧೆ ಅನ್ನೋದು ಯಾವಾಗ, ಎಲ್ಲಿ ಹೇಗೆ ಹುಟ್ಟುತ್ತದೆ ಅನ್ನುವುದನ್ನು ಹೇಳುವುದು ತುಂಬಾ ಕಷ್ಟು. ಅದಕ್ಕೆ ತಾಜಾ ಉದಾಹರಣೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗೊಡಚಿ ಗ್ರಾಮದಲ್ಲಿ ಟೀ ಕುಡಿಯೋ ಸಮಯದಲ್ಲಿ ಮಾತ ಮಾತಲ್ಲಿ ಹುಟ್ಟಿಕೊಂಡ ಈ‌ ಸ್ಪರ್ಧೆ, ಹೌದು ಗೊಡಚಿ ಗ್ರಾಮದ ಹಿರಿಯ ರೈತ ವಿರೂಪಾಕ್ಷಗೌಡ ಪಾಟೀಲ ತನ್ನ 58 ನೇ ವಯಸ್ಸಿನಲ್ಲಿ ಯುವ ಸಮಯದಾಯ ನಾಚ್ಚುವಂತೆ ಗೊಬ್ಬರ ತುಂಬಿದ 50 ಕೆಜಿ ಚೀಲವನ್ನು 7 ಕಿಲೋಮೀಟರ್ ಮೀಟರು ಹೊತ್ತು ನಡೆಯುವ ಮೂಲಕ ತನ್ನ ಪೌರುಷ ತೋರಿಸಿದ್ದಾರೆ. ಚಂದರಗಿ ಗ್ರಾಮದಿಂದ ಗೊಡಚಿ ಗ್ರಾಮದವರೆಗೂ 7 ಕಿಲೊಮೀಟರ್ ನಡೆದುಕೊಂಡು ಬಂದಿದ್ದಾರೆ.‌

ಒಂದು ಚೀಲ ಎತ್ತಲು ಇಂದಿನ ಯುವ ಸಮುದಾಯ ಪಕ್ಕದವರ ಸಹಾಯ ಪಡೆದುಕೊಳ್ಳುವ ಈ‌ ಕಾಲದಲ್ಲಿ, ಟೀ ಕುಡಿಯೋ ಪ್ರೀ ಟೈಂನಲ್ಲಿ ಹುಟ್ಟಿಕೊಂಡ ಸ್ಪರ್ಧೆಯ ಮಾತಿನಿಂದ ವಿರೂಪಾಕ್ಷಗೌಡ ಅವರು ಯಾರೊಬ್ಬರ ಸಹಾಯವಿಲ್ಲದೆ ಎಳು ಕಿಲೋಮೀಟರ್ ಚೀಲ ಹೊತ್ತು ಸ್ಪರ್ಧೆ ಪೂರ್ಣ ಮಾಡಿರುವುದು ಗ್ರಾಮದ ರೈತ ಸಮುದಾಯದಲ್ಲಿ ಸಂತಸ ಮೂಡಿಸಿದೆ. ಜತೆಗೆ ರೈತನ ಈ ಸಾಧನೆಗೆ ಗ್ರಾಮಸ್ಥರೆಲ್ಲರು ವಿರೂಪಾಕ್ಷ ಗೌಡರಿಗೆ ಸನ್ಮಾನಿಸಿ, ಗ್ರಾಮದಲ್ಲಿ ಟ್ಯಾಕ್ಟರನಲ್ಲಿ ಮೆರವಣಿಗೆ ಮಾಡಿ ಗೌರವಿಸಿ ಸಂಭ್ರಮಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!