April 16, 2025

ಬೆಳಗಾವಿ ಹುಕ್ಕೇರಿ ತಾಲೂಕು ಕಣಗಲಾ

ಶ್ರೀ ಥಳೇಶ್ವರ ಯಾತ್ರಾ ಕಮಿಟಿ ಹಾಗೂ ಶ್ರೀ ಶಂಕರಾನಂದ ಅಭಿಮಾನಿ ಬಳಗ ಕಣಗಲಾ ಇವರ ವತಿಯಿಂದ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದಲ್ಲಿ ಪತ್ರಿ ವರ್ಷದಂತೆ ಈ ವರ್ಷವು ಕೂಡಾ ದಿನಾಂಕ 10-04-2024 ರಂದು ಶ್ರೀ ಥಳೇಶ್ವರ ಜಾತ್ರಾ ಮಹೋತ್ಸವವು ಬಿ. ಶಂಕರಾನಂದ ನಗರ ಕಣಗಲಾ ದಲ್ಲಿ ಅತಿ ವಿಜೃಂಭಣೆಯಿಂದ ನಡೆಯಿತು.

ಈ ದಿನ ಮುಂಜಾನೆ ಮಹಾಪೂಜೆ ಅಭಿಷೇಕ ಆರತಿ ಭಜನೆ ಹಾಗೂ ಭಕ್ರರಿಂದ ದಂಡವತ ಹಾಕಿ ಅಂಬಲಿಯ ಬಿಂದಿಗೆಯೊಂದಿಗೆ ಗ್ರಾಮದ ಪ್ರಮುಖ ಬಿದಿಗಳಿಂದ ಕುದುರೆ ಕುಣಿತ ಹಾಗೂ ವಾದ್ಯಗಳೊಂದಿಗೆ ಭಕ್ತರಿಂದ ಜಯಘೋಷಣೆ ಹಾಕುತ್ತಾ, ದೇವಸ್ಥಾನದ ಕಡೆ ಮೆರವಣಿಗೆ ಹೋಯಿತು.

ಮೆರವಣಿಗೆ ನಂತರ ಮಧ್ಯಾಹ್ನ ಮಹಾಪ್ರಸಾದದ ಆಯೋಜನೆ ಮಾಡಲಾಗಿತ್ತು ಸದರಿ ಮಹಾಪ್ರಸಾದವನ್ನು ಸೇವಿಸಿ ಎಲ್ಲ ಭಕ್ತರು ಪುಣಿತರಾದರು.

ವರದಿಗಾರರು

ಸಂತೋಷ ನಿರ್ಮಲೆ, ಬೆಳಗಾವಿ

ಪಬ್ಲಿಕ್ ರೈಡ್

Leave a Reply

Your email address will not be published. Required fields are marked *

error: Content is protected !!