January 29, 2026

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ: ಅಯ್ಯಪ್ಪ ದೇವಸ್ಥಾನ ರಸ್ತೆಯ ಕಿರಣ್ ಎಂಟರ್ಪ್ರೈಸಸ್ ಮಾಲೀಕರಾದ ಪ್ರಕಾಶ್ ಅವರ ನೇತೃತ್ವದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಅದ್ದೂರಿ ಗಣೇಶೋತ್ಸವ ಸಂಭ್ರಮದಿಂದ ಆಚರಿಸಲಾಯಿತು.

ಬಳಿಕ ಮಾತನಾಡಿದ ಪ್ರಕಾಶ್ ಅವರು,’ ಪ್ರತಿ ವರ್ಷದಂತೆ ನಮ್ಮ ಕುಟುಂಬದವರಿಂದ, ಸ್ನೇಹಿತರು ಸಂಗಡಿಗರು ಸೇರಿ ಭಕ್ತಿ ಭಾವದಿಂದ ಗೌರಿ ಗಣೇಶನನ್ನು ಪ್ರತಿಷ್ಠಾಪಿಸಿ, ಪೂಜಿಸಿ, ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನೀಡಲಾಗುತ್ತದೆ. ದೇವರು ಸಮಸ್ತ ನಾಡಿನ ಜನರಿಗೆ ಆರೋಗ್ಯ, ಐಶ್ವರ್ಯ, ನೆಮ್ಮದಿ ಮತ್ತು ಸುಖ ಶಾಂತಿ ಕರುಣಿಸಲಿ ಎಂದು ಕೇಳಿಕೊಳ್ಳಲಾಗುತ್ತದೆ’ ಎಂದರು.

ಈ ಸಂದರ್ಭದಲ್ಲಿ ಮಾಲೀಕರಾದ ಶ್ರೀ ರಾಮ್ (ರಾಮಣ್ಣ), ತೇಜು ಮತ್ತು ಸ್ಥಳೀಯರು, ಸಂಗಡಿಗರು, ಸ್ನೇಹಿತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!